ಓ ನನ್ನ ಪ್ರೀತಿಯ ಗುಲಾಬಿ...
ಎಲ್ಲೆಡೆ ಸುಗಂಧವನ್ನು ಚೆಲ್ಲುತ್ತ, ನನ್ನ ಮನವಸೆಳೆದೆನೀನು.
ನಿನ್ನ ಅತಿಯಾಗಿ ಹಚ್ಚಿಕೊಂಡಿರುವ, ಮೆಚ್ಚಿಕೊಂಡಿರುವ ನಿನ್ನ
ಪ್ರೀತಿಯ ಮುಳ್ಳು ನಾನು.
ಏಕೋ ಕಾಣೆ, ನಿನ್ನನಗಲಿ ಬದುಕಿರಲಾರೆ ನಾನು.
ನಿನ್ನ ಅಗುಲಿದ ಬದುಕೂ, ಒಂದು ಬದುಕೇನು?
ಬಿಸಿಲು-ಮಳೆಗೆ, ಬಿರುಗಾಳಿ-ಚಳಿಗೆ ರೋಸಿಹೋದೆಯೇನು?
ಚಿಂತಿಸಬೇಡ ಒಲವೇ; ಸದಾ ನಿನ್ನ ನೆರಳಾಗಿರುವೆ ನಾನು.
ನಮ್ಮಿಬ್ಬರ ಈ ಮಧುರ ಸಾಮಿಪ್ಯವನ್ನು ಸಹಿಸುವರುಂಟೇನು?
ಸಹಿಸದೇ ಹೋದರೇ ನನಗೇನು?
ನಮ್ಮಿಬ್ಬರನ್ನು ಅಗುಲಿಸಲು ಬಂದರೆ ಮಾತ್ರ,ಅವರ ಕೈ ಸೀಳದೇ ಬಿಡುವುದಿಲ್ಲ ನಾನು.
ಇತಿ ನಿನ್ನ ಪ್ರೀತಿಯ ಮುಳ್ಳು!
~ಅರ್ಚನಾ ಕುರಟ್ಟಿ
Saturday, July 10, 2010
ಪ್ರಕೃತಿ - ನೀನೇ ನಮಗೆ ಸ್ಪೂರ್ತಿ
ಬೇಕು ಬೇಕು ಬೇಕು - ನೀನು ನನಗಿನ್ನೂ ಸಾಕು
ಬೇಕು ಬೇಕು ಬೇಕು- ನೀನು ನನಗಿನ್ನೂ ಸಾಕು.
ಏಕೆಂದರೆ ನನಗೆ ದೇವರು ಬೇಕು.
ದೇವರನ್ನು ಪಡೆಯಬೇಕಾದರೆ ಮನಸ್ಸು ಶಾಂತವಾಗಿರಬೇಕು.
ಮನಸ್ಸು ಶಾಂತವಾಗಿರಬೇಕಾದರೆ ಬೇಕನ್ನು ನಿಲ್ಲಿಸಬೇಕು ಮತ್ತು ದೇವರಿಗಾಗಿ ಹಂಬಲಿಸಬೇಕು.
ಎಲ್ಲವನ್ನು ಶ್ರುಸ್ಟಿಸುವ, ಎಲ್ಲವನ್ನು ಕೊಡುವ ದೇವರೇ ನಮಗೆ ಸಿಕ್ಕರೆ ಬೇರೆಯೇನುಬೇಕು?
~ಅರ್ಚನಾ ಕುರಟ್ಟಿ
ಏಕೆಂದರೆ ನನಗೆ ದೇವರು ಬೇಕು.
ದೇವರನ್ನು ಪಡೆಯಬೇಕಾದರೆ ಮನಸ್ಸು ಶಾಂತವಾಗಿರಬೇಕು.
ಮನಸ್ಸು ಶಾಂತವಾಗಿರಬೇಕಾದರೆ ಬೇಕನ್ನು ನಿಲ್ಲಿಸಬೇಕು ಮತ್ತು ದೇವರಿಗಾಗಿ ಹಂಬಲಿಸಬೇಕು.
ಎಲ್ಲವನ್ನು ಶ್ರುಸ್ಟಿಸುವ, ಎಲ್ಲವನ್ನು ಕೊಡುವ ದೇವರೇ ನಮಗೆ ಸಿಕ್ಕರೆ ಬೇರೆಯೇನುಬೇಕು?
~ಅರ್ಚನಾ ಕುರಟ್ಟಿ
Subscribe to:
Posts (Atom)